ಎಲ್ಲವೂ ಬೇಕು ನನಗೆ!

ಪ್ರಿಯ ಸಖಿ,
ಅದೂ ಬೇಕು ಇದೂ ಬೇಕು
ಎಲ್ಲವೂ ಬೇಕು ನನಗೆ
ದಾರಿ ನೂರಾರಿವೆ ಬೆಳಕಿನರಮನೆಗೆ
ಕವಿ. ಜಿ.ಎಸ್. ಶಿವರುದ್ರಪ್ಪನವರ ‘ಹಿನ್ನುಡಿ’ ಎಂಬ ಕವನದ ಈ ಸಾಲುಗಳನ್ನು ಓದಿರುವೆಯೊ ಸಖಿ? ವ್ಯಕ್ತಿ ನನಗೆ ಇದೇ ಸಾಕು ‘ಇಷ್ಟೇ ಸಾಕು’ ಈ ಸಿದ್ಧಾಂತವೇ ಸರಿ; ತನ್ನ ಧರ್ಮವೇ ‘ಶ್ರೇಷ್ಠ’ ಎಂಬೆಲ್ಲಾ ಮಿತಿಗಳಿಗೆ ಬಿದ್ದಾಗ ಅವನ ಮನಸ್ಸು ಸಂಕುಚಿತಗೊಳ್ಳುತ್ತಾ ಸಾಗುತ್ತದೆ. ಆದ್ದರಿಂದಲೇ ಕವಿ ‘ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ’ ಎನ್ನುತ್ತಾರೆ ಮುಂದುವರೆಯುತ್ತಾ ಹೀಗೆಂದುಕೊಳ್ಳುತ್ತಾರೆ.
ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ
ನನಗಿಲ್ಲ ಇದೇ ಸರಿ ಇಷ್ಟೇ ಸರಿ ಎನ್ನುವ ಪಂತ
ನಾ ಬಲ್ಲೆ ಇವು ಎಲ್ಲ ಏರುವೆಯ
ಒಂದೊಂದು ಹಂತ
ಮನಸ್ಸು ವಿಶಾಲವಾದಾಗ ಎಲಾ ತತ್ವ ಸಿದ್ಧಾಂತಗಳಲ್ಲೂ ತನಗೆ ಬೇಕಾದ ಒಳಿತನ್ನು ಹುಡುಕಲಾರಂಭಿಸುತ್ತದೆ. ಬೆಳಕಿನರಮನೆ ಒಂದೇ? ವಿವೇಕ ಮತ್ತು ಜ್ಞಾನದ ಗುರಿ ಒಂದೇ ಆದರೂ ಅದನ್ನು ತಲುಪಲು ನೂರಾರು ದಾರಿಗಳಿವೆ. ಇವುಗಳೆಲ್ಲವೂ ಅರಿವಿನ ಒಂದೊಂದು ಮೆಟ್ಟಿಲುಗಳು. ತನ್ನದೇ ಸರಿ ಎಂಬ ಅಹಂಕಾರದ ಮಿತಿಯನ್ನು ಹಾಕಿಕೊಂಡಾಗ ವ್ಯಕ್ತಿ ಬಾವಿ ಕಪ್ಪೆಯಾಗಿ ಬಿಡುತ್ತಾನೆ. ಆ ಮಿತಿಯೇ ಅವನ ಸೋಲಾಗುತ್ತದೆ ಕವನದ ಕೊನೆಯಲ್ಲಿ ಕವಿ,
ನೂರಾರು ಭಾವದ ಬಾವಿ; ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ
ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ
ನಮಗೆ ಬೇಕಾದದ್ದು ದಾಹ ಪರಿಹಾರ!
ಎನ್ನುತ್ತಾರೆ. ಎಂಥಹಾ ಅರ್ಥಪೂರ್ಣ ಮಾತಲ್ಲವೇ ಸಖೀ? ನಮಗೆ ಬೇಕಾಗಿರುವುದು ಸಿಹಿ ನೀರಷ್ಟೆ ! ಆದರೆ ನಾವು ಪಾತ್ರೆಯಾಕಾರಗಳ ಕುರಿತು ವ್ಯರ್ಥ ಜಗಳ ಶುರುವಿಟ್ಟುಕೊಂಡು ಎಷ್ಟೊಂದು ತತ್ವ, ನೀತಿ, ಮೌಲ್ಯ, ಧರ್ಮ, ಗುಣಗಳಿದ್ದೂ ‘ನಮ್ಮದೇ ಸರಿ’ ಎಂಬ ಒಣ ಪ್ರತಿಷ್ಠೆಯನ್ನು ಮುಂದೆ ಮಾಡಿಕೊಂಡು ಒಳತಿರುಳನ್ನು ಬಿಟ್ಟು ಮೇಲಿನ ಕರಟಕ್ಕಾಗಿ ಕಾದಾಡಿ ನಿರ್ವೀರ್ಯರಾಗುತ್ತಿದ್ದೇವೆ. ನಮಗೆ ಬೇಕಾದದ್ದು ದಾಹ ಪರಿಹಾರ. ಅದಕ್ಕೆ ಯಾವಾಗ ಯಾವ ಬಾವಿಯ ಸಿಹಿ ನೀರಾದರೇನು? ಅಲ್ಲವೆ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ನನ್ನ ಚಿನ್ನ ರನ್ನ?
Next post ಹುಣ್ಣಿಮೆಯ ಚಂದ್ರಮನು

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys